ಅಷ್ಟಗಲ ಬಾಯಿ ತೆರೆದು
ಗುಂಡಿಯಿಲ್ಲದ ನನ್ನ ಪ್ಯಾಂಟ್ಸಿನ ಹಾಗೇ
ನಗಬೇಡ ನನೆದುರು ಕುಳಿತು
ಮರೆತು ಹೋದ್ದಲ್ಲ
ಜನಕ್ಕೆ ಅಗೌರವ ತೋರಿಸುತೇನೆ
ಎಂದಲ್ಲ
ಮುಖ್ಯ ಇದಕ್ಕೆ ಬಟನ್ಸೆ ಇಲ್ಲ.
ನೀ ನಗುತೀಯ!
ಹುಟ್ಟಿಬಂದಾಗ ಮಾತು ಕೊಟ್ಟದ್ದುಂಟೆ
ಪ್ಯಾಂಟ್ಸು ಹಾಕುತ್ತೇನೆ
ಬಟನ್ಸ್ ಇರಿಸುತ್ತೇನೆ ಎಂದೆಲ್ಲ?
ತಪ್ಪು ಮುತ್ತಜ್ಜ ಆಡಮನದು
ಅಲ್ಲ ಮುತ್ತಜ್ಜಿಯದೊ?
ಬಾ. ಯಾಕೆ ಈ ಮುಖವಾಡ?
ಒಂದಿಷ್ಟು ಬಂಧನರಹಿತರಾಗಿ ಓಡಾಡೋಣ
ಮನ ಬಯಸಿದಲ್ಲಿ, ಬಯಸಿದ ಹಾಗೆ.
ನೋಡುತ್ತೇನೆ ನಿನ್ನ ಸೌಂದರ್ಯ
ಅಷ್ಟು ಜೋಪಾನಿಸಿದ್ದು ಯಾವ ನಿಧಿ?
ಅಷ್ಟು ಕಾಪಾಡಿದ್ದು ಯಾವ ಕಾಮಲತೆ?
ಇಷ್ಟಕ್ಕೆ ಎಷ್ಟಯ್ಯ ಬೆಲೆ?
ಸ್ವಾಮಿ. ಮೀಟರಿಗೆ ನಲವತ್ತು!
ನನಗೆ ನಾನೇ ಕೇಳಿ ಪಡೆದ ಅಕ್ಷಯವಸನ
ಆವರಣ
ಈ ಕೌಪೀನ
ಇದು ಮನ್ವಂತರಗಳ ಮಾನಸಿಕ ದೌರ್ಬಲ್ಯದ ನಿ –
ಶಾನೆ – ನಾನೆ ಹುಟ್ಟಿಸಿಕೊಂಡ ಕೃತಕ ನಾಗರಿ –
ಕತೆಯ ಹಳೆ ಹೊಸ ಏಳುನೂರು ಬಂ –
ಧನದ ಏಕಾಧಿಪತ್ಯದ ಸಾಕ್ಷಿ. ಹಾವು
ಪರೆ ಕಳಚಿದಂತೆ ಒಂದೊಂದೆ ಜಾಡಿಸಿ
ಮಹಾವೀರನಾಗಲೆ?
ದಿಗಂಬರನಾಗಿ ಪರ್ವತದಿಂದ ಹೇಳಲೆ
ಪರ್ವತ ಗೀತೆ?
ಹೇಳಿದರೆ ವಿಷಕುಡಿಸಿ ನನ್ನ ಕೊಂದೀಯ ನೀನೆ!
*****
Related Post
ಸಣ್ಣ ಕತೆ
-
ಪ್ರೇಮನಗರಿಯಲ್ಲಿ ಮದುವೆ
ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…
-
ಪ್ರಕೃತಿಬಲ
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…
-
ನಾಗನ ವರಿಸಿದ ಬಿಂಬಾಲಿ…
ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…
-
ಸ್ನೇಹಲತಾ
೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…
-
ಮೌನರಾಗ
ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…